ಪರ್ಕಳ ಪೇಟೆಯ ಸ್ವರ್ಣೋದ್ಯಮಿ, ಕಾಂಗ್ರೆಸ್ ಮುಖಂಡ ಗೋಪಾಲ್ ಆಚಾರ್ಯ ನಿಧನ
Saturday, April 18, 2026
ಪರ್ಕಳ ಕಾಂಗ್ರೆಸ್ ಹಿರಿಯ ಮುಖಂಡ. ಸ್ವರ್ಣೋದ್ಯಮಿ. ಪರ್ಕಳ ಗೋಪಾಲ ಆಚಾರ್ಯ(74) ಏಪ್ರಿಲ್ 18 ರಂದು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು .
ಮೃತರು ಕಾಂಗ್ರೆಸ್ ಪಕ್ಷ ಮುನ್ನಡೆಸುವಲ್ಲಿ ಅಂದಿನ ಕಾಲದಲ್ಲಿ. ನಾಯಕರಾಗಿ ದುಡಿದಿದ್ದರು, ಮೃತರಿಗೆ ಪತ್ನಿ, ಎರಡು ಗಂಡು , ಎರಡು ಹೆಣ್ಣು ಮಕ್ಕಳಿದ್ದು. ಈ ಭಾಗದಲ್ಲಿ ಎಲ್ಲರೊಂದಿಗೆ ಜನಮನ್ನಣೆ ಪಡೆದಿದ್ದರು. ಶ್ರೀಮತಿ ಮನೋರಮ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಅವರ ಚುನಾವಣೆಯಲ್ಲಿ ಕೂಡ ಕೆಲಸ ಮಾಡಿದ್ದರು. ಉಡುಪಿ ಬ್ಲಾಕ್ ಕಾಂಗ್ರೆಸ್ಸಿನ ಸದಸ್ಯರಾಗಿದ್ದ ಅವರು ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಹಿರಿಯರೆನಿಸಿಕೊಂಡಿದ್ದರು.