ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳ ನಿಯುಕ್ತಿ
Monday, August 31, 2026
ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಸುರೇಂದ್ರ ಪೂಜಾರಿ ಮುನಿಯಾಲು, ಧೀರಜ್ ಕೆ. ಎಸ್., ದಿನೇಶ್ ಎರ್ಮಾಳು, ಚಂದ್ರ ಜೋಗಿ, ಭಾರತಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಗಳಾಗಿ ರತ್ನಾಕರ ಶೆಟ್ಟಿಗಾರ್ ಇಂದ್ರಾಳಿ, ರಾಜೇಂದ್ರ ಪಂದುಬೆಟ್ಟು, ಕಾರ್ಯದರ್ಶಿಗಳಾಗಿ ಅನಿಲ್ ಕುಮಾರ್, ಉಮೇಶ್ ಮೊಗವೀರ, ಎಂ.ಲಕ್ಷ್ಮೀಶ ಬಂಗೇರ, ಅಶೋಕ್ ಕುಮಾರ್ ಅಲೆವೂರು, ಕೋಶಾಧಿಕಾರಿಯಾಗಿ ವಿನೋದ್ ಕುಮಾರ್ ಗುಜ್ಜಾಡಿ, ಕಾರ್ಯಕಾರಿಣಿ ಸದಸ್ಯರುಗಳಾಗಿ ಸುಂದರ ಜೆ. ಕಲ್ಮಾಡಿ, ರಾಘವೇಂದ್ರ ಆಚಾರ್ಯ, ಲೀಲಾ, ಆರ್. ಅಮೀನ್, ಗಿರಿಧರ ಆಚಾರ್ಯ, ಶರತ್ ಶರ್ಮ, ಆದರ್ಶ ನಾಯರಿ ಬ್ರಹ್ಮಾವರ, ಅಶೋಕ್ ಶೆಟ್ಟಿಗಾರ್, ಆನಂದ ಕುಲಾಲ್, ಹರ್ಷಿತ್ ಪೂಜಾರಿ, ಸುಧಾಕರ ಕುಲಾಲ್, ಗೋವಿಂದ ರಾವ್ ಶೇರೆಗಾರ್, ಚಂದ್ರ ಪೂಜಾರಿ, ಗುರುಪ್ರಸಾದ್ ರಾವ್, ಶ್ರೀಧರ ಶೆಟ್ಟಿಗಾರ್, ಮಂಜುಳಾ, ಬಿ.ವಿ. ಬ್ರಿಜೇಶ್ ಕುಮಾರ್, ಸುರೇಶ್ ದೇವಾಡಿಗ ಇವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಪ್ರವೀಣ್ ಕುಮಾರ್ ಗುರ್ಮೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.