-->
 ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಟೈಪ್1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಕುಟುಂಬ ಸಂವಾದ

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಟೈಪ್1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಕುಟುಂಬ ಸಂವಾದ


ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ ಕ್ಲಿನಿಕ್, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ, ಟೈಪ್ 1 ಮಧುಮೇಹ ಮೆಲ್ಲಿಟಸ್ ಹೊಂದಿರುವ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಒಂದು ದಿನವಿಡೀ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಈ ಕಾರ್ಯಕ್ರಮವು ಆರೋಗ್ಯ ಶಿಕ್ಷಣ, ಜಾಗೃತಿ ಭಾಷಣ , ಮಧುಮೇಹ ಸಂಬOಧಿತ ತೊಡಕುಗಳ ತಪಾಸಣೆ ಮತ್ತು ಸಂವಾದಾತ್ಮಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಿತ್ತು. ಉಡುಪಿ ಮತ್ತು ನೆರೆಯ ಜಿಲ್ಲೆಗಳಿಂದ T1DM ಹೊಂದಿರುವ ಮಕ್ಕಳ 100ಕ್ಕೂ ಹೆಚ್ಚು ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಮಣಿಪಾಲದ ಕೆಎಂಸಿ ಮತ್ತು ಆಸ್ಪತ್ರೆಯ  ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಭಟ್ ವೈ, ಮಣಿಪಾಲದ ಕೆಎಂಸಿಯ ಮಕ್ಕಳ ಚಿಕಿತ್ಸಾ ವಿಭಾಗದ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿಸ್ಟ್  ಮತ್ತು ಸಹ ಪ್ರಾದ್ಯಾಪಕ  ಡಾ. ಕೌಶಿಕ್ ಉರಾಳ ಎಚ್ ಅವರು ಕಾರ್ಯಕ್ರಮದ ಅವಲೋಕನವನ್ನು ಪ್ರಸ್ತುತಪಡಿಸಿದರು.

ಮಂಗಳೂರಿನ ಯೆನಪೋಯ ವೈದ್ಯಕೀಯ ಕಾಲೇಜಿನ ಮಕ್ಕಳ ಅಂತಃಸ್ರಾವಶಾಸ್ತ್ರಜ್ಞೆ ಡಾ. ದೀಕ್ಷಾ ಶಿರೋಡ್ಕರ್ ಅವರು ಶಾಲೆಯಲ್ಲಿ ಮಧುಮೇಹದ ನಿರ್ವಹಣೆ ಕುರಿತು ತಜ್ಞ ಉಪನ್ಯಾಸ ನೀಡಿದರು. ಮಧುಮೇಹ ಹೊಂದಿರುವ ಮಕ್ಕಳ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸಲು ದಿನನಿತ್ಯದ ಮನೆ ಆಹಾರಕ್ರಮಗಳನ್ನು ಅಳವಡಿಸಿಕೊಳ್ಳುವ ಕುರಿತು ಸಂವಾದಾತ್ಮಕ ಅಧಿವೇಶನವನ್ನು ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗವು ನಡೆಸಿತು, ಇದನ್ನು ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುವರ್ಣ ಹೆಬ್ಬಾರ್ ನೇತೃತ್ವದಲ್ಲಿ ನಡೆಸಲಾಯಿತು. ನೇತ್ರವಿಜ್ಞಾನ ವಿಭಾಗವು ಮಧುಮೇಹ ರೆಟಿನೋಪತಿಗಾಗಿ ಸ್ಕ್ರೀನಿಂಗ್ ಅನ್ನು ನಡೆಸಿತು. ಫಿಸಿಯೋಥೆರಪಿ  ವಿಭಾಗವು ಪಾದಗಳ ಆರೈಕೆ ಮತ್ತು ದೈಹಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರೆ, ಯೋಗ ವಿಭಾಗವು ಗ್ಲೂಕೋಸ್ ನಿಯಂತ್ರಣವನ್ನು ಸುಧಾರಿಸುವಲ್ಲಿ ಯೋಗದ ಪಾತ್ರವನ್ನು ಪ್ರಾತ್ಯಕ್ಷಿಕೆಗಳ ಮೂಲಕ ಎತ್ತಿ ತೋರಿಸಿತು.

ಕಾರ್ಯಕ್ರಮದ ದ್ವಿತೀಯಾರ್ಧದಲ್ಲಿ, ಮಕ್ಕಳು ವಿವಿಧ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.  ಸಮಾರೂಪ ಕಾರ್ಯಕ್ರಮದಲ್ಲಿ ಮಣಿಪಾಲದ ಕೆಎಂಸಿಯ ಸಹ  ಡೀನ್ ಡಾ. ವಿನೋದ್ ಸಿ. ನಾಯಕ್ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಅತಿಥಿಗಳಾಗಿದ್ದರು. 

ಈ ಕಾರ್ಯಕ್ರಮವನ್ನು ಡಾ. ಕೌಶಿಕ್ ಉರಾಳ ಎಚ್ ಅವರು ಪರಿಕಲ್ಪನೆ ಮಾಡಿ ಸಂಯೋಜಿಸಿದರು. 

Ads on article

Advertise in articles 1

advertising articles 2

Advertise under the article