ರಾಷ್ಟ್ರೀಯ ದಂತ ಸಲಹಾ ಮಂಡಳಿ ರಚನೆ: ಕರ್ನಾಟಕ ಪ್ರತಿನಿಧಿಯಾಗಿ ಡಾ. ಶಿವಶರಣ್ ಶೆಟ್ಟಿ ನೇಮಕ
Sunday, April 26, 2026
ರಾಷ್ಟ್ರೀಯ ದಂತ ಆಯೋಗ ಅಧಿನಿಯಮ, 2023ರ ಕಲಂ 11ರ ಅನ್ವಯ ಕೇಂದ್ರ ಸರ್ಕಾರವು ದಂತ ಸಲಹಾ ಮಂಡಳಿಯನ್ನು ರಚಿಸಿ ಆದೇಶ ಹೊರಡಿಸಿದ್ದು,ಇದರಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಯಾಗಿ ಡಾ. ಶಿವ ಶರಣ್ ಶೆಟ್ಟಿ ಅವರನ್ನು ನೇಮಕ ಮಾಡಿದೆ.
ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ದಂತ ಶಿಕ್ಷಣ ವಿಭಾಗದಿಂದ ಈ ಕುರಿತು ಆದೇಶ ಹೊರಡಿಸಲಾಗಿದೆ. ಈ ಮಂಡಳಿಗೆ ರಾಷ್ಟ್ರೀಯ ದಂತ ಆಯೋಗದ ಅಧ್ಯಕ್ಷರು ಹುದ್ದೆ ಅನ್ವಯ ಅಧ್ಯಕ್ಷರಾಗಿದ್ದು, ಆಯೋಗದ ಜೊತೆ ರಾಜ್ಯಗಳ ಪ್ರತಿನಿಧಿಗಳನ್ನೂ ಮಂಡಳಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಕುರಿತು ಹೆಚ್ಚುವರಿ ಕಾರ್ಯದರ್ಶಿ ಡಾ. ವಿನೋದ್ ಕೋಟ್ವಾಲ್ ಆದೇಶ ಹೊರಡಿಸಿದ್ದಾರೆ.