ಹಿರಿಯಡ್ಕದ ಪುತ್ತಿಗೆ ಮೂಲ ಮಠದಲ್ಲಿ ಪಂಚಾಮೃತ ಅಭಿಷೇಕ, ಊಧ್ವಾರ್ಚನೆ
Friday, May 01, 2026
ನರಸಿಂಹ ಜಯಂತಿಯ ಪ್ರಯುಕ್ತ ಉಡುಪಿಯ ಹಿರಿಯಡ್ಕ ಸಮೀಪದ ಶ್ರೀ ಪುತ್ತಿಗೆ ಮೂಲ ಮಠದಲ್ಲಿ ಶ್ರೀ ದೇವರಿಗೆ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀಪಾದರು ಪಂಚಾಮೃತ ಅಭಿಷೇಕದೊಂದಿಗೆ ಸೀಯಾಳ ಅಭಿಷೇಕವನ್ನು ಮಾಡಿ ವಿಶೇಷ ಪೂಜೆಯನ್ನು ಮಾಡಿದರು.
ನಂತರ ಸುವರ್ಣ ನದಿಯ ತೀರದಲ್ಲಿ ಊಧ್ವಾರ್ಚನೆಯೊಂದಿಗೆ ಅಭಿಷೇಕವನ್ನು ಮಾಡಿದರು. ಅಪಾರ ಸಂಖ್ಯೆಯ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.






