ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಂಶುಪಾಲೆ ಸುರೇಖಾ ಕೆ. ಅವರಿಗೆ ಪಿ.ಹೆಚ್.ಡಿ
Saturday, May 02, 2026
ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಸುರೇಖಾ ಕೆ. ಅವರ “A Critical Study on the Enforcement of the Decisions of International Court of Justice” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ.
ಇವರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನು ಪ್ರಸನ್ನನ್ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಪೂರ್ಣಗೊಳಿಸಿದ್ದಾರೆ.
ಸುರೇಖಾ ಕೆ. ಅವರು ಮಲ್ಪೆಯ ಕೃಷ್ಣ ಮತ್ತು ಗಿರಿಜಾ ಮಬಿಯಾನ್ ದಂಪತಿಯ ಪುತ್ರಿಯಾಗಿದ್ದು, ಸದಾಶಿವ ಆದಿಉಡುಪಿ ಅವರ ಧರ್ಮಪತ್ನಿ.