ಕುಡಾಲ್ ದೇಶಸ್ಥ ಸಂಘದ ಜಿಲ್ಲಾಧ್ಯಕ್ಷ ವಿಷ್ಣುದಾಸ್ ಪಾಟೀಲ್ ನಿಧನ
Saturday, July 25, 2026
ಉಡುಪಿ ಜಿಲ್ಲಾ ಕುಡಾಲ ದೇಶಸ್ಥ ಗೌಡ ಬ್ರಾಹ್ಮಣ ಸಂಘದ ಅಧ್ಯಕ್ಷ ವಿಷ್ಣುದಾಸ್ ಪಾಟೀಲ್ (70) ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಇಂದು (ಶನಿವಾರ) ಅಪರಾಹ್ನ ನಿಧನರಾದರು.
ಲಯನ್ಸ್ ಕ್ಲಬ್ ಉಡುಪಿ ಉಪಾಧ್ಯಕ್ಷರಾಗಿದ್ದ ವಿಷ್ಣುದಾಸ್ ಪಾಟೀಲ್ ಅವರು ಔಟ್ ಡೋರ್ ಹೋರ್ಡಿಂಗ್ (ಹೊರಾಂಗಣ ಜಾಹಿರಾತು) ಹಾಗೂ ಫ್ಯಾಬ್ರಿಕೇಶನ್ ವ್ಯವಹಾರ ನಡೆಸುತ್ತಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ.