ಕೊಳಲಗಿರಿಯಲ್ಲಿ "ಹಡಿಲು ಭೂಮಿ ಕೃಷಿ" ಯೋಜನೆಗೆ ಚಾಲನೆ: "ಕೆಸರ್ಡ್ ಒಂಜಿ ದಿನ"
Saturday, July 25, 2026
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘ ಯುವವಿಚಾರ ವೇದಿಕೆ ಕೊಳಲಗಿರಿ ವತಿಯಿಂದ ಮಹತ್ವಾಕಾಂಕ್ಷೆಯ "ಹಡಿಲು ಭೂಮಿ ಕೃಷಿ" ಯೋಜನೆಗೆ ಸಾಂಕೇತಿಕ ಚಾಲನೆ ಹಾಗೂ ಕೆಸರುಗದ್ದೆಯಲ್ಲಿ ಮನೋರಂಜನಾ ಆಟೋಟ ಸ್ಪರ್ಧೆಗಳನ್ನೊಳಗೊಂಡ "ಕೆಸರ್ಡ್ ಒಂಜಿ ದಿನ" ಕಾರ್ಯಕ್ರಮವು ಅಮ್ಮುಂಜೆ ಪರಿಸರದಲ್ಲಿ ಸಂಭ್ರಮದಿಂದ ನಡೆಯಿತು.
ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈ ಉದ್ಯಮಿ ಮೈಕಲ್ ಡಿಸೋಜ, ಉಪ್ಪೂರು ಸಹಕಾರಿ ಸಂಘದ ನಿರ್ದೇಶಕ ರಮೇಶ್ ಕರ್ಕೇರಾ ಉಗ್ಗೇಲ್ ಬೆಟ್ಟು, ಹಿರಿಯರಾದ ಮಾಧವ ಪಾಣ, ಸಂಗೀತಗಾರ ಸಂತೋಷ್ ಪಾಣ, ತುಳು ರಕ್ಷಣಾ ವೇದಿಕೆಯ ರೋಷನ್ ಡಿಸೋಜಾ, ಪೀಟರ್ ಡಿಸೋಜಾ ತೋಡಕಡಿ, ಅಪ್ಪಿ ಪೂಜಾರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಮ್ಮುಂಜೆ ಯುವ ಕೃಷಿಕ ರಿತೇಶ್ ಪೂಜಾರಿ ಅವರನ್ನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಡಿ. ಶೆಟ್ಟಿ, ಆಲ್ವಿನ್ ಡಿಸೋಜಾ, ದೈವ ನರ್ತಕರು ವಿಜಯ ಪಾಣ ತೋನ್ಸೆ ಹಾಗೂ ಸುಷ್ಮಾ ಧೀರಜ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಯುವವಿಚಾರ ವೇದಿಕೆಯ ಮಹತ್ವಾಕಾಂಕ್ಷೆಯ "ಹಡಿಲು ಭೂಮಿ ಕೃಷಿ" ಯೋಜನೆಗೆ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ಸಾಂಕೇತಿಕ ಚಾಲನೆ ನೀಡಲಾಯಿತು. ಕೃಷಿಯ ಮಹತ್ವವನ್ನು ಯುವಜನರಲ್ಲಿ ಬೆಳೆಸುವ ಹಾಗೂ ಹಡಿಲು ಭೂಮಿಯನ್ನು ಮರುಬಳಕೆಗೆ ತರುವ ಉದ್ದೇಶವನ್ನು ಸಂಘ ಈ ಯೋಜನೆಯ ಮೂಲಕ ವ್ಯಕ್ತಪಡಿಸಿತು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್, ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ, ಅಶೋಕ್ ಕುಮಾರ್, ರವೀಂದ್ರ ಕುಮಾರ್, ಶಶಿಕುಮಾರ್, ಸುಕೇಶ್ ಪಾಣ, ಹೇಮಂತ್, ಶಿವಾನಂದ, ಶಕುಂತಲಾ ಸುಕೇಶ್, ಸೌಮ್ಯ ಶೆಟ್ಟಿ, ಶಾಂತಾ ಸೆಲ್ವರಾಜ್, ಸುಕನ್ಯಾ ಸೇರಿದಂತೆ ಅನೇಕ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಬ್ರಮಣ್ಯ ಆಚಾರ್ಯ ಅವರು ನಿರೂಪಿಸಿದರು.
.jpeg)

.jpeg)