Gangolli: ದೋಣಿ ದುರಂತ; ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ

Gangolli: ದೋಣಿ ದುರಂತ; ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ



ಗಂಗೊಳ್ಳಿಯಲ್ಲಿ ಮೀನುಗಾರಿಕಾ ದೋಣಿ ಮುಳುಗಿ ನಾಪತ್ತೆಯಾಗಿದ್ದ ಮತ್ತೋರ್ವ ಮೀನುಗಾರನ ಮೃತದೇಹ ಕೋಟೇಶ್ವರ ಹಳೆ ಅಳಿವೆ ಸಮೀಪ ಪತ್ತೆಯಾಗಿದೆ. ಗಂಗೊಳ್ಳಿಯ ದಿವಂಗತ ಶೀನ ಖಾರ್ವಿ ಎಂಬವರ ಪತ್ರ ಜಗನ್ನಾಥ ಖಾರ್ವಿ(50) ಎಂಬವರ ಮೃತದೇಹ ಸಂಜೆ ವೇಳೆಗೆ ಪತ್ತೆಯಾಗಿದೆ. ಗಂಗೊಳ್ಳಿಯ ಬಂದರಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಜುಲೈ 15ರಂದು ಅಲೆಗಳ ರಭಸಕ್ಕೆ ಸಿಲುಕಿ ಮುಳುಗಡೆಯಾಗಿತ್ತು.

ಘಟನೆಯಲ್ಲಿ ಮೂವರು ಮೀನುಗಾರರು ಸಮುದ್ರ ಪಾಲಾಗಿದ್ದರೆ, ಓರ್ವ ಈಜಿ ದಡ ಸೇರಿದ್ದರು. ಜುಲೈ 16ರ ಬೆಳಗ್ಗೆ ಬೇಲಿಕೇರಿ ನಿವಾಸಿ ಲೋಹಿತ್ ಖಾರ್ವಿ ಎಂಬವರ ಮೃತದೇಹ ಕೋಡಿ ಲೈಟ್ ಹೌಸ್ ಸಮೀಪ ಪತ್ತೆಯಾಗಿತ್ತು. ಇದೀಗ ಜಗನ್ನಾಥ್ ಖಾರ್ವಿ ಅವರ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವ ಮೀನುಗಾರ ಸುರೇಶ್ ಖಾರ್ವಿ ಅವರ ಸುಳಿವು ಲಭ್ಯವಾಗಿಲ್ಲ. 


Ads on article

Advertise in articles 1

advertising articles 2

Advertise under the article