Gujarat: ಕಾಡು ಪ್ರಾಣಿಗಳ ದಾಳಿ; ಪ್ರಾಣ ರಕ್ಷಣೆಗಾಗಿ ಕೃಷಿಕನಿಂದ ಹೊಸ ಪ್ರಯೋಗ

Gujarat: ಕಾಡು ಪ್ರಾಣಿಗಳ ದಾಳಿ; ಪ್ರಾಣ ರಕ್ಷಣೆಗಾಗಿ ಕೃಷಿಕನಿಂದ ಹೊಸ ಪ್ರಯೋಗ


ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದೆ. ಅಲ್ಲಿನ ಜನರಿಗೆ ರಾತ್ರಿ ಮಲಗಿದರೆ ಕಾಡು ಪ್ರಾಣಿಗಳ ಪಾಲಾಗುತ್ತೇವೆಯೋ ಎನ್ನುವ ಆತಂಕ. ಹುಲಿ, ಚಿರತೆ ಉಪಟಳದಿಂದ ತನ್ನ ಮಕ್ಕಳನ್ನು ರಕ್ಷಿಸಲು ಬಡ ಕೃಷಿ ಕೆಲಸಗಾರ ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. 

ಸುತ್ತ ದಟ್ಟಾರಣ್ಯ.. ಅಲ್ಲೇ ಪಕ್ಕದಲ್ಲೊಂದು ಪುಟ್ಟ ಗುಡಿಸಲು.. ಗುಡಿಸಲಿನಲ್ಲಿ ತನ್ನ ಆರು ಮಂದಿ ಪುಟ್ಟ ಮಕ್ಕಳೊಂದಿಗೆ ಬಡ ಕೃಷಿಕನ ಬದುಕು.. ತಾನಾಯಿತು ತನ್ನ ಪಾಡಾಯಿತು ಅಂತ ದುಡಿದು ತಿನ್ನುವ ಅಂದ್ರೆ ಕಾಡು ಪ್ರಾಣಿಗಳ ಉಪಟಳ.. ಹುಲಿ, ಚಿರತೆ ಕಾಟದಿಂದ ಬೇಸತ್ತ ಈ ಕೃಷಿಕ ತನ್ನ ಮಕ್ಕಳನ್ನೇ ಗೂಡಿನಲ್ಲಿ ಇರಿಸಿದ್ದಾರೆ. ಇದು ಗುಜರಾತಿನ ಅಮ್ರೇಲಿ ಜಿಲ್ಲೆಯ ಗಿರ್ ನ್ಯಾಶನಲ್ ಪಾರ್ಕ್ ಸಮೀಪದಲ್ಲೇ ಇರುವ ಬಡ ಕೃಷಿಕನೋರ್ವನ ಕಥೆ. ಹೆಂಡತಿ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ ನಂತರ ಮಕ್ಕಳ ಜೊತೆ ಕಾಡ ತಪ್ಪಲಿನ ಪುಟ್ಟ ಗುಡಿಸಲಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಈ ಕೃಷಿಕ ಭರತ್ ಬಾಯ್. ಹೆಂಡತಿ ಹಾಗೂ ತಾಯಿ ನಿಧನ ಹೊಂದಿದ ನಂತರ ಮಕ್ಕಳ ರಕ್ಷಣೆ, ಊಟೋಪಚಾರ ಎಲ್ಲವೂ ಈ ಬಡ ಕೃಷಿಕನ ಹೆಗಲಿಗೇರಿದೆ. ಒಂದೆಡೆ ತಾನು ದುಡಿದು ಮಕ್ಕಳನ್ನು ಸಲಹಬೇಕು, ಮತ್ತೊಂದೆಡೆ ಪುಟ್ಟ ಪುಟ್ಟ ಮಕ್ಕಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬಡ ಕೃಷಿಕ ಹೊಸತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. 


ಚಿರತೆಗಳ ದಾಳಿಯಿಂದ ತಮ್ಮ ಜಮೀನಿನಲ್ಲಿ ಜನ ಭಯಭೀತರಾಗಿಯೇ ವಾಸಿಸುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಕಾಡುಪ್ರಾಣಿಗಳಿಂದ ಮಕ್ಕಳನ್ನು ರಕ್ಷಿಸಲು ಕಬ್ಬಿಣದ ಪಂಜರವೊ0ದನ್ನು ಕೃಷಿ ಕೆಲಸಗಾರ ಭರತ್ ಭಾಯ್ ಖಿಮಾ ಭಾಯ್ ಮಾಡಿದ್ದಾರೆ. ಅಂದ ಹಾಗೆ ಇವರು ಜಪೋದರ್ ಗ್ರಾಮದ ಸಿಮ್ ಪ್ರದೇಶದಲ್ಲಿ ವಾಸವಾಗಿದ್ದಾರೆ. ಕಾಡು ಪ್ರಾಣಿಗಳ ಉಪಟಳದಿಂದ ಜೀವ ಭಯ ಎದುರಾಗಿತ್ತು. ಹೀಗಾಗಿ ರಾತ್ರಿ ಹೊತ್ತು ಕಬ್ಬಿಣದ ಜಾಲರಿಯಿಂದ ಮಾಡಿದ ಪಂಜರದಲ್ಲಿ ಮಕ್ಕಳನ್ನು ಮಲಗಿಸಲಾಗುತ್ತದೆ. ರಾತ್ರಿ ಪಾಳಿಯಲ್ಲಿ ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಬಳಸಿದರೆ ಬೆಳಗ್ಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪಂಜರದಲ್ಲಿರಿಸಿ ತಾನು ಕೃಷಿ ಕೆಲಸಕ್ಕೆ ತೆರಳುತ್ತಾರೆ. ಒಟ್ಟಿನಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವನ ನಡುವಿನ ಸಂಘರ್ಷವನ್ನು ತಪ್ಪಿಸಲು ಕೃಷಿಕ ಕೈಗೊಂಡ ಹೊಸತೊಂದು ಪ್ರಯೋಗಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.








Ads on article

Advertise in articles 1

advertising articles 2

Advertise under the article