ಜನವಸತಿ ಪ್ರದೇಶದಲ್ಲಿ ಹಾಡುಹಗಲೇ ಮುಳ್ಳುಹಂದಿ ಪ್ರತ್ಯಕ್ಷ
Tuesday, February 10, 2026
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಜನವಸತಿ ಪ್ರದೇಶದಲ್ಲಿ ಹಾಡು ಹಗಲೇ ಮುಳ್ಳುಹಂದಿಯೊOದು ಪ್ರತ್ಯಕ್ಷವಾಗಿದೆ.
ಪುತ್ತೂರಿನ ಬ್ಲಡ್ ಬ್ಯಾಂಕ್ ಸಮೀಪ ಮುಳ್ಳುಹಂದಿ ಪತ್ತೆಯಾಗಿದ್ದು, ಗಾಯಗಳಾಗಿತ್ತು. ವಾಹನ ಡಿಕ್ಕಿ ಹೊಡೆದು ಗಾಯಗೊಂಡಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ಸ್ನೇಕ್ ತೇಜಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಮುಳ್ಳುಹಂದಿಯ ರಕ್ಷಣೆ ಮಾಡಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಉಲ್ಲಾಸ್ ಅವರು ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದರು.
