ಉಡುಪಿ ಜಿಲ್ಲೆಯಲ್ಲಿ ಚಿರತೆ ಕಾಟ; ಹಲವೆಡೆ ಬೋನ್ ಇರಿಸಿದ ಅರಣ್ಯ ಇಲಾಖೆ
Friday, February 06, 2026
ಉಡುಪಿ ಜಿಲ್ಲೆಯ ಹಲವೆಡೆ ಚಿರತೆ ಓಡಾಟದ ಭೀತಿ ಎದುರಾಗಿದ್ದು, ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ವಿವಿಧ ಕಡೆಗಳಲ್ಲಿ ಬೋನ್ ಇರಿಸಿದೆ.
ಉಡುಪಿ ಜಿಲ್ಲೆಯ ತೆಂಕನಿಡಿಯೂರು, ಬಡನಿಡಿಯೂರು, ಕೆಮ್ಮಣ್ಣು, ಹೂಡೆ ಸೇರಿದಂತೆ ಮೂಡುಬೆಳ್ಳೆ, ಹಿರಿಯಡ್ಕ, ಪಾದೂರು ಭಾಗಗಳಲ್ಲೂ ರಾತ್ರಿ ವೇಳೆ ಚಿರತೆ ಸಂಚಾರ ಕಂಡು ಬಂದಿದೆ. ಹೀಗಾಗಿ ಆ ಭಾಗದ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅಲ್ಲಲ್ಲಿ ಬೋನ್ ಇಡಲಾಗಿದೆ.