ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಯಶೋದಾ ಕೇಶವ್ ಅವರಿಗೆ ಸನ್ಮಾನ
Wednesday, March 04, 2026
ಉಡುಪಿಯ ಬಡಾನಿಡಿಯೂರು ಪಾವಂಜಿಗುಡ್ಡೆ ಸರ್ವದಾ ಯುವ ಸಂಘದ ವತಿಯಿಂದ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಯಶೋದಾ ಕೇಶವ್ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾದ ಜಗನ್ನಾಥ ಸಾಲ್ಯಾನ್, ಗೌರವ ಸಲಹೆಗಾರರಾದ ಸದಾನಂದ ಗಾಣಿಗ, ಗೌರವಾಧ್ಯಕ್ಷರಾದ ಗೋವರ್ಧನ್, ಕಾರ್ಯದರ್ಶಿ ಗಂಗಾಧರ್ ಸಾಲ್ಯಾನ್, ಮಹಿಳಾ ಅಧ್ಯಕ್ಷೆ ಮೀರಮ್ಮ ಭಟ್, ಕಾರ್ಯದರ್ಶಿ ಭಾನುಮತಿ ಸಾಲ್ಯಾನ್,ಮಾಜಿ ಅಧ್ಯಕ್ಷೆ ಭಾರತಿ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.