-->
 Udupi: ಆಟಿಸಂ ಮಕ್ಕಳ ಪೋಷಕರ ಸ್ವಸಹಾಯ ಗುಂಪು "ಸಂವೇದ"ದ 14ನೇ ಮಾಸಿಕ ಸಭೆ

Udupi: ಆಟಿಸಂ ಮಕ್ಕಳ ಪೋಷಕರ ಸ್ವಸಹಾಯ ಗುಂಪು "ಸಂವೇದ"ದ 14ನೇ ಮಾಸಿಕ ಸಭೆ


ಆಟಿಸಂ ಸೊಸೈಟಿ ಆಫ್ ಉಡುಪಿ, ಡಾ ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಮತ್ತು ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟಿಸಂ ಮಕ್ಕಳ ಪೋಷಕರ ಸ್ವಸಹಾಯ ಗುಂಪು - ಸಂವೇದದ 14 ನೇ ಮಾಸಿಕ ಸಭೆ ನಡೆಯಿತು. 


ಉಡುಪಿಯ ಶಾಲಾ ಪೂರ್ವ ತಯಾರಿ ಕೇಂದ್ರದ ಮೇಲ್ವಿಚಾರಕಿ ಕು ದೀಕ್ಷಿತ ಅವರು ನಿಧಾನ ಗತಿಯ ಮಕ್ಕಳ ಬೆಳವಣಿಗೆಯಲ್ಲಿ ಫಿಸಿಯೋಥೆರಪಿ ಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಯುಕೆಯಲ್ಲಿ ಮಕ್ಕಳ ಬೆಳವಣಿಗೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಧರ್ಮ ಶೇಖರ್ ಪಾಟೀಲ್ ಅವರು ಆಟಿಸಂ ಪಾಲನೆಯ ಸಂಶೋಧನೆಗಳ ಕುರಿತು ಮಾಹಿತಿ ನೀಡಿದರು. 


ಆಟಿಸಂ ಸೊಸೈಟಿ ಆಫ್ ಉಡುಪಿ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ, ಸಂವೇದ ಗುಂಪಿನ ಅಧ್ಯಕ್ಷ ವಿಠ್ಠಲ ಭಕ್ತ, ಪ್ರೋಗ್ರಾಂ ಮ್ಯಾನೇಜರ್ ಕೀರ್ತೇಶ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article