ಉಡುಪಿ ಕೃಷ್ಣಮಠಕ್ಕೆ ಭೀಮನಕಟ್ಟೆ ಮಠದ ಪೀಠಾಧೀಶ ರಘುವರೇಂದ್ರ ತೀರ್ಥರು ಭೇಟಿ
Saturday, February 21, 2026
ಭೀಮನಕಟ್ಟೆ ಮಠದ ಪೀಠಾಧೀಶರಾದ ಶ್ರೀ ರಘುವರೇಂದ್ರ ತೀರ್ಥ ಶ್ರೀ ಪಾದರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ತಮ್ಮ ಶಿಷ್ಯರೊಂದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಭೀಮನಕಟ್ಟೆ ಶ್ರೀ ಪಾದರನ್ನು ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯ್ ಕುಮಾರ್ ಸರಳತ್ತಾಯ, ಶೀರೂರು ಮಠದ ಪಾರುಪತ್ಯೇಗಾರರಾದ ಶ್ರೀಶ ಭಟ್ ಕಡೇಕಾರು ಉಪಸ್ಥಿತರಿದ್ದರು.

.jpeg)