ದೆಂದೂರುಕಟ್ಟೆ ಮನೋಜ್ ಬಾರ್ ಮಾಲಕ ಸಕಾರಾಮ್ ಶೆಟ್ಟಿ ನಿಧನ
Saturday, April 11, 2026
ಖ್ಯಾತ ಉದ್ಯಮಿ, ದೆಂದೂರುಕಟ್ಟೆ ನಿವಾಸಿ ಸಕಾರಾಮ್ ಶೆಟ್ಟಿ(65) ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನ ಹೊಂದಿದರು.
ರಿಯಲ್ ಎಸ್ಟೇಟ್ ಉದ್ಯಮಿ, ಪೆಟ್ರೋಲ್ ಪಂಪ್ ಮಾಲಕರಾಗಿ, ಬಸ್ ಮಾಲಕರಾಗಿದ್ದ ಸಕಾರಾಮ್ ಶೆಟ್ಟಿಯವರು ದೆಂದೂರು ಕಟ್ಟೆ ಗಣೇಶೋತ್ಸವ ಸಮಿತಿ, ನೆಹರೂ ಹೈಸ್ಕೂಲ್ ಆಡಳಿತ ಮಂಡಳಿ, ಬಂಟರ ಸಂಘ ಸಹಿತ ಇತರ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪತ್ನಿ, ಪುತ್ರ , ಪುತ್ರಿ ಹಾಗೂ ಅಪಾರ ಬಂಧ ಬಳಗವನ್ನು ಅಗಲಿದ್ದಾರೆ.