ನಿವೃತ್ತ ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿ ಕೆ. ದಿನಕರ ರಾವ್ ನಿಧನ
Tuesday, July 14, 2026
ಬ್ರಹ್ಮಾವರದ ಚಾಂತಾರು ನಿವಾಸಿ, ನಿವೃತ್ತ ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿ ಕೆ. ದಿನಕರ ರಾವ್ (64) ಅವರು ಸೋಮವಾರ ನಿಧನರಾದರು.
ಮೃತರು ತಂದೆ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿದ್ದ ಅವರು, ತಮ್ಮ ಸರಳ ವ್ಯಕ್ತಿತ್ವ ಹಾಗೂ ಸೌಜನ್ಯದಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಅವರ ನಿಧನಕ್ಕೆ ಕುಟುಂಬದವರು, ಬಂಧು-ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.