
Dharmasthala: ಸರಣಿ ಶವಗಳ ಹೂತ ಪ್ರಕರಣ; 2ನೇ ದಿನವೂ ದೂರುದಾರನ ವಿಚಾರಣೆ
27/07/2025
ಧರ್ಮಸ್ಥಳದಲ್ಲಿ ಸರಣಿ ಶವಗಳ ಹೂತಿರುವ ಪ್ರಕರಣಕ್ಕೆ ಸಂಬ0ಧಿಸಿ ಎಸ್ಐಟಿ ತಂಡವು ಎರಡನೇ ದಿನವೂ ದೂರುದಾರನ ವಿಚಾರಣೆ ನಡೆಸಿದೆ.
ಬೆಳಿಗ್ಗೆ 10 ಗಂಟೆಯ ಬಳಿಕ ದೂರುದಾರನನ್ನು ಮತ್ತೆ ಮಂಗಳೂರಿನ ಮಲ್ಲಿಕಟ್ಟೆ ಐಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎಸ್ ಐಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಅವರು ಹಾಜರಿದ್ದರು. ತನಿಖೆ ಮುಗಿದ ಬಳಿಕ ಮುಖ್ಯಸ್ಥ ಬೆಳ್ತಂಗಡಿಯ ನೂತನ ಎಸ್.ಐ.ಟಿ ಕಚೇರಿಗೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಹೊಸ ಕಟ್ಟಡದಲ್ಲಿ ಎಸ್.ಐ.ಟಿ ಕಚೇರಿಗೆ ವ್ಯವಸ್ಥೆ ಮಾಡಲಾಗಿದ್ದು, ಕಚೇರಿಯಲ್ಲಿ ಪರಿಶೀಲನೆ ಮಾಡಲು ಮಂಗಳೂರಿನಿ0ದ ನೇರವಾಗಿ ಬೆಳ್ತಂಗಡಿಗೆ ಸಂಜೆ 6 ಗಂಟೆಗೆ ತೆರಳಿದರು.