
Udupi: ಮಾನಸ ಅವರಿಂದ ಭರತನಾಟ್ಯ ರಂಗ ಪ್ರವೇಶ
31/07/2025
ಚೆನ್ನೈಯ ದಕ್ಷಿಣ ಸಂಸ್ಥೆಯ ನಿರ್ದೇಶಕಿ, ನೃತ್ಯ ಗುರು ದಿವ್ಯಾ ನಾಯರ್ ಇವರ ಶಿಷ್ಯೆ ಮಾನಸ ಇವರ ‘ಭರತನಾಟ್ಯ ರಂಗಪ್ರವೇಶ’ ಕಾರ್ಯಕ್ರಮವು ಜುಲೈ 30ರಂದು ಸಂಜೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ನಡೆಯಿತು.
ಮಲ್ಲಿಕಾ ಮತ್ತು ಸಿ.ಕೆ. ಮಂಜುನಾಥ ಇವರ ಪುತ್ರಿಯಾಗಿರುವ ಮಾನಸ ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳನ್ನು ಉತ್ತಮ ಶ್ರೇಣಿಯಲ್ಲಿ ಪೂರೈಸಿರುತ್ತಾರೆ. 2019ರಲ್ಲಿ ಯುವ ಕಲಾ ಪ್ರಶಸ್ತಿ ದೊರಕಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರದ ವಿದ್ಯಾರ್ಥಿ ವೇತನವನ್ನು ಪಡೆದಿರುತ್ತಾರೆ.