Dharmasthala: ಸರಣಿ ಶವ ಹೂತ ಪ್ರಕರಣ; 11ನೇ ಪಾಯಿಂಟ್‌ನಲ್ಲಿ ಉತ್ಖನನ

Dharmasthala: ಸರಣಿ ಶವ ಹೂತ ಪ್ರಕರಣ; 11ನೇ ಪಾಯಿಂಟ್‌ನಲ್ಲಿ ಉತ್ಖನನ


ಧರ್ಮಸ್ಥಳದಲ್ಲಿ ಸರಣಿ ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬ0ಧಿಸಿ ದೂರುದಾರ ಗುರುತಿಸಿದ 11ನೇ ಸ್ಥಳದಲ್ಲಿ ಅಗೆಯುವ ಕಾರ್ಯ ಮುಂದುವರಿದೆ.
 


ಆಗಸ್ಟ್ 5ರಂದು ಬೆಳಗ್ಗೆ ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ 11ನೇ ಪಾಯಿಂಟ್‌ನಲ್ಲಿ ಅಗೆಯಲಾಗುತ್ತಿದೆ. ಆಗಸ್ಟ್ 4ರಂದು 11ನೇ ಪಾಯಿಂಟ್‌ನಲ್ಲಿ ಉತ್ಖನನಕ್ಕಾಗಿ ಎಸ್‌ಐಟಿ ತಂಡ ಕಾರ್ಮಿಕರೊಂದಿಗೆ ತೆರಳಿತ್ತು. ಆದರೆ 11ನೇ ಪಾಯಿಂಟ್‌ನ ಮೇಲ್ಭಾಗದಲ್ಲಿ ದೂರುದಾರರ ಜಾಗವೊಂದು ಗುರುತಿಸಿದ್ದು, ಅಲ್ಲೇ ನೆಲದ ಮೇಲೆಯೇ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿತ್ತು. ಅವಶೇಷಗಳನ್ನು  ತಜ್ಞರ ತಂಡ ವೈಜ್ಞಾನಿಕ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಹೀಗಾಗಿ 11ನೇ ಪಾಯಿಂಟ್‌ನಲ್ಲಿ ಅಗೆಯಲು ಸಾಧ್ಯವಾಗಿರಲಿಲ್ಲ. 


ಆಗಸ್ಟ್ 5ರಂದು ಮತ್ತೆ 11ನೇ ಸ್ಥಳದಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ ಎಂದು ತಿಳಿದು ಬಂದಿದೆ.


Ads on article

Advertise in articles 1

advertising articles 2

Advertise under the article