-->
 ನೀರಿನ ಪಂಪ್ ಆನ್ ಮಾಡುತ್ತಿದ್ದಾಗ ವಿದ್ಯುತ್ ಆಘಾತ; ವ್ಯಕ್ತಿ ಸಾವು

ನೀರಿನ ಪಂಪ್ ಆನ್ ಮಾಡುತ್ತಿದ್ದಾಗ ವಿದ್ಯುತ್ ಆಘಾತ; ವ್ಯಕ್ತಿ ಸಾವು


ನೀರಿನ ಪಂಪ್ ಸ್ವಿಚ್ ಆನ್ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಗುರಿಪಳ್ಳದಲ್ಲಿ ನಡೆದಿದೆ. 

ಗುರಿಪಳ್ಳ ಕಡಿಯಾರು ಗ್ರಾಮದ ನಿವಾಸಿ  ಶಿವಪ್ರಸಾದ್ ಆದಪ್ಪ(49) ಮೃತಪಟ್ಟವರು. ಇಂದು(ಜ.26) ಬೆಳಗ್ಗಿನ ಜಾವ ನೀರಿನ ಪಂಪ್ ಸ್ವಿಚ್ ಆನ್ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 

 

  


Ads on article

Advertise in articles 1

advertising articles 2

Advertise under the article