-->
ಅಂತರ್‌ ಜಿಲ್ಲಾ ದ್ವಿಚಕ್ರ ವಾಹನ ಕಳ್ಳರ ಬಂಧನ

ಅಂತರ್‌ ಜಿಲ್ಲಾ ದ್ವಿಚಕ್ರ ವಾಹನ ಕಳ್ಳರ ಬಂಧನ


ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳರಿಬ್ಬರನ್ನು ಮಣಿಪಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಿರಣ್ ಬಿ.ಎನ್ ಹಾಗೂ ಶಿವಮೊಗ್ಗ ಜಿಲ್ಲೆಯ ನಿದಿಗಿ ನಿವಾಸಿ ಯೋಗೀಶ್ ನಾಯ್ಕ್ ಬಂಧಿತ ಆರೋಪಿಗಳು.  

2025 ರ ಆಗಸ್ಟ್ 30ರಂದು  ಶಿವಳ್ಳಿ ಗ್ರಾಮದ  ಮಣಿಪಾಲ  ಕಾಯಿನ್‌ ಸರ್ಕಲ್‌ ಬಳಿಯ ಹಾಟ್‌  &  ಸ್ಪೈಸ್‌  ಹೋಟೆಲ್‌ ಬಳಿ  ನಿಲ್ಲಿಸಿದ್ದ ಪ್ರದೀಪ್‌ ಸಾಲ್ಯಾನ್ ಎಂಬವರ ದ್ವಿಚಕ್ರ ವಾಹನ ಕಳವಾಗಿತ್ತು. ಈಬಗ್ಗೆ ಮಣಿಪಾಲ  ಠಾಣೆಯಲ್ಲಿ  ಅಪರಾದ   ಕ್ರಮಾಂಕ  155/2025 ಕಲಂ  303(2)  BNSರಂತೆ  ಪ್ರಕರಣ ದಾಖಲಾಗಿತ್ತು.  ತನಿಖೆ ನಡೆಸಿದ ಪೊಲೀಸರು ಕಳ್ಳರಿಬ್ಬರನ್ನು ಬಂಧಿಸಿದ್ದಾರೆ. 

ಡಿ.ವೈ.ಎಸ್.ಪಿ ಪ್ರಭು ಡಿ.ಟಿ ಮಾರ್ಗದರ್ಶನದಲ್ಲಿ  ಮಣಿಪಾಲ  ಪೊಲೀಸ್‌  ಠಾಣಾ  ನಿರೀಕ್ಷಕರಾದ ಮಹೇಶ  ಪ್ರಸಾದ ಅವರ ನಿರ್ದೇಶನದಂತೆ ಠಾಣೆಯ  ಪೊಲೀಸ್‌  ಉಪನಿರೀಕ್ಷಕರಾದ ಅನಿಲ್‌  ಬಿ ಎಂ, ಅಕ್ಷಯ ಕುಮಾರಿ  ಎಸ್‌ ಎನ್‌ ನೇತೃತ್ವದಲ್ಲಿ ಠಾಣಾ  ಸಿಬ್ಬಂದಿಗಳಾದ  ವಿಶ್ವಜಿತ್‌, ಚೇತನ್‌, ಅಜ್ಮಲ್‌  ರವಿರಾಜ್‌, ಮಂಜುನಾಥ ಅವರನ್ನು ಒಳಗೊಂಡ  ಅಪರಾದ  ಪತ್ತೆ  ತಂಡವು ಕಾರ್ಯಾಚರಣೆ ನಡೆಸಿದೆ. 

ಬಂಧಿತ ಆರೋಪಿ  ಕಿರಣ್ ವಿರುದ್ಧ ಈ ಹಿಂದೆಯು  ಸಹ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

Ads on article

Advertise in articles 1

advertising articles 2

Advertise under the article