-->
 2022ರ ಕೊಲೆ ಪ್ರಕರಣ; ಆರೋಪಿ ಮುರುಗನ್‌ಗೆ ಜೀವಾವಧಿ ಶಿಕ್ಷೆ

2022ರ ಕೊಲೆ ಪ್ರಕರಣ; ಆರೋಪಿ ಮುರುಗನ್‌ಗೆ ಜೀವಾವಧಿ ಶಿಕ್ಷೆ


ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಮುರುಗನ್ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದ್ದಾರೆ.

2022ರ ಮಾ.19ರಂದು ರಾತ್ರಿ 9:45ಕ್ಕೆ ಬಪ್ಪನಾಡು ಗ್ರಾಮದ ಮುಲ್ಕಿ ಪೇಟೆಯಲ್ಲಿ ಉಲ್ಲಂಜೆ ಎಂಬಲ್ಲಿನ ಹರೀಶ್ ಸಾಲ್ಯಾನ್ (47) ಎಂಬಾತನನ್ನು ಹಣಕಾಸಿನ ದ್ವೇಷದಿಂದ ಮುರುಗನ್ ಕೆಂಪುಕಲ್ಲಿನಿAದ ಜಜ್ಜಿ ಕೊಲೆ ಮಾಡಿದ್ದ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಸಿಐ ಕುಸುಮಧರ್ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಎಸ್ಸೈ ಸಂಜೀವ್ ಸಹಕರಿಸಿದ್ದರು. ಸರಕಾರದ ಪರವಾಗಿ ಜ್ಯೋತಿ ಪ್ರಮೋದ್ ನಾಯಕ್ ವಾದಿಸಿದ್ದರು. 


Ads on article

Advertise in articles 1

advertising articles 2

Advertise under the article