-->
 ಬುಡ್ನಾರಿನಲ್ಲಿ “ಡುಂಡಿರಾಜರ ಹೊಸ ಕವಿತೆಗಳು“ ಕಾರ್ಯಕ್ರಮ

ಬುಡ್ನಾರಿನಲ್ಲಿ “ಡುಂಡಿರಾಜರ ಹೊಸ ಕವಿತೆಗಳು“ ಕಾರ್ಯಕ್ರಮ


ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಯೋಜನೆಯಲ್ಲಿ ಹನಿ ಕವಿತೆಗಳ ರಾಜ “ಡುಂಡಿರಾಜರ ಹೊಸ ಕವಿತೆಗಳು” ಕಾರ್ಯಕ್ರಮ ಉಡುಪಿಯ ಬುಡ್ನಾರಿನ ಅಂಶು ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಕವಿ ಡುಂಡಿರಾಜರು ಉಡುಪಿಯ ಸಾಹಿತ್ಯಾಸಕ್ತರರಿಗೆ ತಮ್ಮ ಹೊಸ ಹನಿಗವನಗಳು, ಹೈಕುಗಳ ಮೂಲಕ ಮನಸ್ಸನ್ನು ಮುದಗೊಳಿಸಿದರು. 

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ  ಸುಜಿ ಕುರ್ಯ ತಮ್ಮ ಸ್ವರಚಿತ ಹನಿಗವನಗಳನ್ನು ಪ್ರಸ್ತುತ ಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಕ ಸಾ ಪ ಉಡುಪಿ ತಾಲೂಕಿನ ಅಧ್ಯಕ್ಷ ರವಿರಾಜ್ ಹೆಚ್. ಪಿ. ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್, ಕ ಸಾ ಪ ದ ನಾರಾಯಣ ಮಡಿ ಭುವನಪ್ರಸಾದ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಸಂಧ್ಯಾ ಶೆಣೈ ನಿರೂಪಿಸಿ, ಪೂರ್ಣಿಮಾ ಜನಾರ್ಧನ್ ಧನ್ಯವಾದ ಸಮರ್ಪಿಸಿದರು.

Ads on article

Advertise in articles 1

advertising articles 2

Advertise under the article