-->
 "ಮನೆಗೊಂದು ಗ್ರಂಥಾಲಯ" ಅಭಿಯಾನದ  ಸಹ ಸಂಚಾಲಕರಾಗಿ ರವಿರಾಜ್ ಹೆಚ್.ಪಿ ನೇಮಕ

"ಮನೆಗೊಂದು ಗ್ರಂಥಾಲಯ" ಅಭಿಯಾನದ ಸಹ ಸಂಚಾಲಕರಾಗಿ ರವಿರಾಜ್ ಹೆಚ್.ಪಿ ನೇಮಕ


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕನ್ನಡ ಪುಸ್ತಕ ಪ್ರಾಧಿಕಾರ ಇದರ ವತಿಯಿಂದ ರಾಜ್ಯಾದ್ಯಂತ  ನಡೆಯುತ್ತಿರುವ ಮನೆಗೊಂದು ಗ್ರಂಥಾಲಯ ಅಭಿಯಾನ ಇದರ ಉಡುಪಿ ಜಿಲ್ಲೆಯ ಸಹ ಸಂಚಾಲಕರಾಗಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಅವರನ್ನು ನೇಮಕ ಮಾಡಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಆದೇಶ ಮಾಡಿದ್ದಾರೆ. 

ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಹತಾ ಪತ್ರವನ್ನು ನೀಡಿ ಗೌರವಿಸಿದರು. ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಸದಸ್ಯರಾಗಿ ಕಸಾಪ  ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾದ೯ನ್ ಕೊಡವೂರು, ರಂಜನಿ ವಸಂತ್ , ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಂಘಟನಾ ಕಾರ್ಯದರ್ಶಿಗಳಾದ ಸತೀಶ್ ಕೊಡವೂರು, ರಾಘವೇಂದ್ರ ಪ್ರಭು ಕವಾ೯ಲು, ರೇಡಿಯೋ ಮಣಿಪಾಲ್ ನಿರ್ದೇಶಕಿ ಡಾ.ರಶ್ಮೀ ಅಮ್ಮೆಂಬಳ, ದೀಪಾ ಚಂದ್ರಕಾಂತ್, ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಅವರನ್ನು ಆಯ್ಕೆ ಮಾಡಲಾಗಿದೆ. 

Ads on article

Advertise in articles 1

advertising articles 2

Advertise under the article