ಕಾಪು ಶ್ರೀ ಹೊಸಮಾರಿಗುಡಿ ಕಚೇರಿ ನಿರ್ವಾಹಕ ಸಂತೋಷ್ ಶೆಟ್ಟಿ ಗುರ್ಮೆ ನಿಧನ
Tuesday, August 18, 2026
ಕಾಪು ಶ್ರೀ ಹೊಸಮಾರಿಗುಡಿ ಕಚೇರಿ ನಿರ್ವಾಹಕ, ಸಾಯಿ ಕ್ಯಾಟರರ್ಸ್ ಮಾಲಕರಾದ ಸಂತೋಷ್ ಶೆಟ್ಟಿ ಗುರ್ಮೆ ಕಳತ್ತೂರು ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.
ಅವರು ಪತ್ನಿ, ಪುತ್ರ, ಕುಟುಂಬಸ್ಥರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ, ಕಳೆದ 32 ವರ್ಷಗಳಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ನಿಧನಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ ಮತ್ತು ಸಿಬ್ಬಂದಿ ವರ್ಗ ಸಂತಾಪ ವ್ಯಕ್ತಪಡಿಸಿದೆ.