ಪಾದಚಾರಿಗೆ ಸ್ಕೂಟರ್ ಡಿಕ್ಕಿ: ಸವಾರೆ ಸಹಿತ ಇಬ್ಬರಿಗೆ ಗಾಯ
Monday, May 18, 2026
ಪಾದಚಾರಿಗೆ ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರೆ ಹಾಗೂ ಪಾದಚಾರಿ ಗಂಭೀರ ಗಾಯಗೊಂಡಿರುವ ಘಟನೆ ಉಡುಪಿಯ ಕುಕ್ಕಿಕಟ್ಟೆ ರೈಲ್ವೆ ಸೇತುವೆ ಬಳಿ ಶನಿವಾರ ನಡೆದಿದೆ.
ಸ್ಕೂಟರ್ ಸವಾರೆ ಮೂಡುಬೆಳ್ಳೆಯ ವೀಣಾ ನಾಯ್ಕ್ ಹಾಗೂ ಪಾದಚಾರಿ ಶಿರ್ಸಿಯ ಭಾಸ್ಕರ ಭಂಡಾರಿ ಗಾಯಗೊಂಡವರು.
ಗಾಯಾಳುಗಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸ್ಥಳೀಯರ ಸಹಕಾರದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದಾರೆ.