Puttur: ಯುವತಿಗೆ ವಂಚನೆ ಪ್ರಕರಣ; ಮಗು ಸಹಿತ ಮೂವರ ಡಿಎನ್‌ಎ ಪರೀಕ್ಷೆ

Puttur: ಯುವತಿಗೆ ವಂಚನೆ ಪ್ರಕರಣ; ಮಗು ಸಹಿತ ಮೂವರ ಡಿಎನ್‌ಎ ಪರೀಕ್ಷೆ


ಪುತ್ತೂರಿನಲ್ಲಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡು ಮಗುವಾದ ಬಳಿಕ ಮದುವೆಯಾಗಲು ನಿರಾಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೂವರ ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ. ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ ರಾವ್, ಯುವತಿ ಹಾಗೂ ಮಗುವಿನ ಡಿಎನ್‌ಎ ಪರೀಕ್ಷೆಯನ್ನು ನಡೆಸಲಾಗಿದೆ.  


ಮೂರು ತಿಂಗಳ ಮಗು, ಕೃಷ್ಣ ಜೆ ರಾವ್ ಹಾಗೂ ಯುವತಿಯ ರಕ್ತದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಆರೋಪಿ ಕೃಷ್ಣ ಜೆ ರಾವ್ ಸಹಪಾಠಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ. ಯುವತಿ ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿದ್ದ.  ಕೃಷ್ಣ ಜೆ ರಾವ್‌ನ ಮನವೊಲಿಸಿದರೂ ಪ್ರಯೋಜನವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಕೃಷ್ಣ ಜೆ ರಾವ್‌ನನ್ನು ಬಂಧಿಸಲಾಗಿದೆ. ಇದೀಗ ಮೂವರ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾ ವರದಿ ಬರಬೇಕಷ್ಟೆ. 


Ads on article

Advertise in articles 1

advertising articles 2

Advertise under the article