Bangalore: ಮನೆಯಲ್ಲಿ ಸ್ಫೋಟ; ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ- ಸಿಎಂ ಭರವಸೆ

Bangalore: ಮನೆಯಲ್ಲಿ ಸ್ಫೋಟ; ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ- ಸಿಎಂ ಭರವಸೆ



ಅನುಮಾನಾಸ್ಪದ ಸ್ಫೋಟ ಸಂಭವಿಸಿದ ಬೆಂಗಳೂರಿನ ಚಿನ್ನಯ್ಯನಪಾಳ್ಯ ಪ್ರದೇಶಕ್ಕೆ ಸಿಎಂ ಸಿದ್ಧರಾಮಯ್ಯ ಭೇಟಿ ನೀಡಿದರು. ಈ ವೇಳೆ ಮೃತ ಬಾಲಕ ಮುಬಾರಕ್ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು. 


ಘಟನೆಯಲ್ಲಿ ಛಿದ್ರಗೊಂಡ 3ಕ್ಕೂ ಅಧಿಕ ಮನೆಗಳನ್ನು ಪುನರ್ ನಿರ್ಮಿಸಿಕೊಡುವ ಭರವಸೆಯನ್ನು ನೀಡಿದರು. ಚಿನ್ನಯ್ಯ ಪಾಳ್ಯದಲ್ಲಿ ಆಗಸ್ಟ್ 15ರಂದು ಅನುಮಾನಾಸ್ಪದ ಸ್ಫೋಟ ಸಂಭವಿಸಿ, ಬಾಲಕ ಸಾವನ್ನಪ್ಪಿದ್ದು, 8ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 






Ads on article

Advertise in articles 1

advertising articles 2

Advertise under the article