Karkala: ಬೈಲೂರು ಥೀಂ ಪಾರ್ಕ್ ಶೀಘ್ರ ಕಾಮಗಾರಿಗೆ ಆಗ್ರಹ; ಆ. 6ರಂದು ಬಿಜೆಪಿಯಿಂದ ವಾಹನ ಜಾಥಾ

Karkala: ಬೈಲೂರು ಥೀಂ ಪಾರ್ಕ್ ಶೀಘ್ರ ಕಾಮಗಾರಿಗೆ ಆಗ್ರಹ; ಆ. 6ರಂದು ಬಿಜೆಪಿಯಿಂದ ವಾಹನ ಜಾಥಾ


ಕಾರ್ಕಳ ತಾಲೂಕಿನ ಬೈಲೂರು ಪರಶುರಾಮ ಥೀಂ ಪಾರ್ಕ್ನ ಕಾಮಗಾರಿಯನ್ನು ಶೀಘ್ರವೇ ಮುಂದುವರಿಸುವಂತೆ ಆಗ್ರಹ ಕೇಳಿ ಬಂದಿದೆ. ಶೀಘ್ರವೇ ಕಾಮಗಾರಿಯನ್ನು ಮುಂದುವರಿಸುವಂತೆ ಮುಂದಿನ ದಿನಗಳಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. 


ಈ ಬಗ್ಗೆ ಕಾರ್ಕಳ ವಿಕಾಸ ಸೌಧದಲ್ಲಿ ಪೂರ್ವಭಾವಿ ಸಭೆ ನಡೆದಿದೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಪರಶುರಾಮ ಥೀಂ ಪಾರ್ಕ್  ಕುರಿತು ಕಾಂಗ್ರೆಸ್ ನಾಯಕರು ಟೂಲ್ ಕಿಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪರಶುರಾಮ ಥೀಂ ಪಾರ್ಕ್ನ ಕಾಮಗಾರಿಯನ್ನು ಒಂದು ತಿಂಗಳೊಳಗೆ ಆರಂಭಿಸಬೇಕೆಂದು ಆಗ್ರಹಿಸಿದ ಸುನಿಲ್ ಕುಮಾರ್, ಆಗಸ್ಟ್ 6ರಂದು ಬೆಳಗ್ಗೆ ಕಾರ್ಕಳ ಅನಂತಶಯನದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.   



Ads on article

Advertise in articles 1

advertising articles 2

Advertise under the article